ಸಪ್ತಸಾಗರ ವಾರ್ತೆ, ವಿಜಯಪುರ, ನ. 7: ಕವನ ರಚಿಸುವ ಕಾರ್ಯ ತುಂಬ ಕ್ಲಿಷ್ಟಕರವಾದದ್ದು. ಜಿಲ್ಲೆಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಕವಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ನೀಡಿದ್ದು ಶ್ಲಾಘನೀಯ ಕಾರ್ಯ ಎಂದು ಹಿರಿಯ ಸಾಹಿತಿ ಕವಿಯಿತ್ರಿ ಭಾರತಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ರಾಜ್ಯೋತ್ಸವ ನಿಮಿತ್ತ ಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕವನ ರಚಿಸಲು ಆಸಕ್ತಿ ಹಾಗೂ ಪ್ರತಿಭೆ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಮಾತನಾಡಿ, ಗುಣಮಟ್ಟದ ಕವನ ರಚಿಸಿ ವಾಚಿಸಿದ್ದು ಅತ್ಯಂತ ಸಂತೋಷದ ಸಂಗತಿ. ಕನ್ನಡ ನಾಡು-ನುಡಿ, ನೆಲ-ಜಲ ಕಾಪಾಡುವ ಹಾಗೂ ಕನ್ನಡ ನಾಡಿಗಾಗಿ ದುಡಿದವರನ್ನು ಸ್ಮರಿಸುವ ಕವನಗಳು ಗಮನ ಸೆಳೆದವು ಎಂದರು.
ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಗದೀಶ ಬೋಳಸೂರ ಮಾತನಾಡಿ, ಪ್ರಚಲಿತ ವಿದ್ಯಮಾನ ಕುರಿತು ಗುಣಮಟ್ಟದ ಕವನ ವಾಚಿಸಿದ್ದಾರೆ. ಕವನಗಳು ಜನಸಾಮಾನ್ಯರ ಮನಸ್ಸನ್ನು ಸೆಳೆಯುತ್ತವೆ ಎಂದರು.
ಕವಿ ಗೋಷ್ಠಿಯಲ್ಲಿ ಶೋಭಾ ಮೇಡೆಗಾರ, ಕವಿತಾ ಕಲ್ಯಾಣಪ್ಪಗೋಳ, ಅಂಬಿಕಾ ಕರಕಪ್ಪಗೋಳ, ಶಿವಾಜಿ ಮೋರೆ, ಸಾವಿತ್ರಿ ತಳವಾರ, ವೈಶಾಲಿ ಬಿಳೂರ, ಸಂಗಮೇಶ ಹಚಡದ, ಶಾಂತಾ ಪಾಟೀಲ, ಶಿವಲೀಲಾ ಕೋರಿ, ಅಂಬಣ್ಣ ಬಡಚಿ, ನಿಂಗಪ್ಪ ಬೊಮ್ಮನಹಳ್ಳಿ, ಶೈಲಾ ಗೊಂಗಡಿ, ರಜಿಯಾ ದಳವಾಯಿ, ಶಾಂತಾ ಬಿರಾದಾರ, ಶೋಭಾ ಹರಿಜನ, ಶರಣು ಚೆಟ್ಟಿ, ದಾನಮ್ಮ ಹೂಗಾರ, ಚಾಂದಬಿ ಬಿಜಾಪುರ, ಸಿದ್ದಪ್ಪ ಕಟೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾಸಿಂಪೀರ ವಾಲಿಕಾರ, ಅಲ್ಲಮಪ್ರಭು, ಮಹಮ್ಮದಗೌಸ ಹವಾಲ್ದಾರ, ಡಾ. ಸುರೇಖಾ ರಾಠೋಡ. ರಾಜೇಶ್ವರಿ ಮೋಪಗಾರ, ಶಿಲ್ಪಾ ಭಸ್ಮೆ, ಮಹೇಶ ಕ್ಯಾತನ, ಮಾಧವ ಗುಡಿ, ಡಾ. ಆನಂದ ಕುಲಕರ್ಣಿ, ಲತಾ ಗುಂಡಿ, ಮಮತಾ ಮುಳಸಾವಳಗಿ, ಶೋಭಾ ಬಡಿಗೇರ, ಯಮನಪ್ಪಾ ಪವಾರ, ಪರವೀನಬಾನು ಶೇಖ, ರೂಪಾ ರಜಪೂತ ಮುಂತಾದವರು ಉಪಸ್ಥಿತರಿದ್ದರು.
ಕವನ ರಚಿಸುವ ಕಾರ್ಯ ಕ್ಲಿಷ್ಟಕರ: ಭಾರತಿ ಪಾಟೀಲ


