ಜಿಒಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅರ್ಜುನ, ಉಪಾಧ್ಯಕ್ಷೆಯಾಗಿ ಪುಷ್ಪಾ ಅವಿರೋಧ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 30:
ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧಕ್ಷ ಸ್ಧಾನಕ್ಕೆ ಅರ್ಜುನ ಲಮಾಣಿ (ಶಿಕ್ಷಣ ಇಲಾಖೆ) ಹಾಗೂ ಉಪಾಧ್ಯಕ್ಷ ಸ್ಧಾನಕ್ಕೆ ಪುಷ್ಪಾ ಗಚ್ಚಿನಮಠ (ಶಿಕ್ಷಣ ಇಲಾಖೆ) ಇವರುಗಳು ಮುಂದಿನ ಅವಧಿಯವರೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಆನಂದಗೌಡ ಬಿರಾದಾರ ಮತ್ತು ಮಲಕಪ್ಪ ಟಕ್ಕಳಕಿ ಇವರು ತಮ್ಮ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದರಿಂದ, ತೆರವಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಜುನ ಲಮಾಣಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪುಷ್ಪಾ ಗಚ್ಚಿನಮಠ (ಶಿಕ್ಷಣ ಇಲಾಖೆ) ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ, ಅಧ್ಯಕ್ಷರಾಗಿ ಅರ್ಜುನ ಲಮಾಣಿ (ಶಿಕ್ಷಣ ಇಲಾಖೆ) ಹಾಗೂ ಉಪಾಧ್ಯಕ್ಷರಾಗಿ ಪುಷ್ಪಾ ಗಚ್ಚಿನಮಠ (ಶಿಕ್ಷಣ ಇಲಾಖೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರ್ಜುನ ಲಮಾಣಿ ಇವರು ಮೂರನೇ ಅವಧಿಗೆ (ಹ್ಯಾಟ್ರಿಕ್) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಪುಷ್ಪಾ ಗಚ್ಚಿನಮಠ ಇವರು ಮೊದಲನೇ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಬ್ಯಾಂಕಿನ ಪ್ರಧಾನ ವ್ಯವಸ್ಧಾಪಕಎಮ್.ಕೆ. ಜೋಶಿ ಇವರು ಜರುಗಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಅರವಿಂದ ಹೂಗಾರ, ಹಣಮಂತ ಕೊಣದಿ, ಪ್ರಶಾಂತ ಚನಗೊಂಡ, ಆನಂದಗೌಡ ಬಿರಾದಾರ, ಅಲ್ಲಾಭಕ್ಷ ವಾಲಿಕಾರ, ಅಶೋಕ ಚನಬಸಗೋಳ, ಮಲಕಪ್ಪ ಟಕ್ಕಳಕಿ, ಚಂದ್ರಶೇಖರ ಜಿತ್ತಿ, ಎಸ್.ಎಸ್. ಕೆರೂರ, ಹನುಮಂತರಾಯ(ಕಿರಣ) ಸಿಂದಗಿ, ಮಹೇಶ ನಾಯಿಕ, ಸರಫರಾಜ ಕಂದಗಲ್, ಗೀತಾ ಹತ್ತಿ(ಕಳಸಗೊಂಡ), ಹಾಗೂ ಹಿತೈಷಿಗಳು, ವ್ಯವಸ್ಧಾಪಕ ಸಿ ಎಸ್ ಹಿರೇಮಠ ಮತ್ತು ಸಿಬ್ಬಂದಿಯವರು ಉಪಸ್ಧಿತರಿದ್ದರು. ಬ್ಯಾಂಕಿನ ಸದಸ್ಯರು ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ರಿಗೆ ಶುಭ ಹಾರೈಸಿದರು.

Share this