ಸರ್ವೇ ಜನ ಸುಖಿನೋ ಭವಂತು ಬಜೆಟ್: ಕಾರಜೋಳ ಪ್ರತಿಕ್ರಿಯೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸರ್ವೇ ಜನ ಸುಖಿನೋ ಭವಂತು ಎಂಬ ಆಶಯದ ಪ್ರತೀಕವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತ, ಕಾರ್ಮಿಕ, ಮಹಿಳಾ ಸಬಲೀಕರಣ, ಯುವ ಶಕ್ತಿಗೆ ಉತ್ತೇಜನ ನೀಡುವ ಮೂಲಕ ಎಲ್ಲರೂ ಸುಖವಾಗಿರಲು ಬೇಕಾಗುವ ನಿಟ್ಟಿನಲ್ಲಿ ಅನೇಕ ಮಹತ್ವದ ಕಾರ್ಯಯೋಜನೆ ರೂಪಿಸಲಾಗಿದೆ.
ಮೂಲ ಸೌಕರ್ಯಗಳ ಪ್ರಗತಿಗೆ ಆದ್ಯತೆ ಮೂಲಕ ಎಲ್ಲ ರಂಗಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಮಧುಮೇಹ ಔಷಧಿಗಳ ದರ ಕಡಿಮೆ, ಕರ್ನಾಟಕಕ್ಕೆ ಹೈ ಸ್ಪೀಡ್ ರೈಲುಗಳ ಕೊಡುಗೆ, ಕರಾವಳಿಯ ಅಭಿವೃದ್ಧಿಗೆ ಆದ್ಯತೆ, ವಿಶೇಷ ಚೇತನರಿಗಾಗಿ ದಿವ್ಯಾಂಗ ಸಹಾರಾ ಯೋಜನೆ, ಸಿಎನ್‌ಜಿ, ಬಯೋಗ್ಯಾಸ್, ಸೋಲಾರ್ ಉಪಕರಣಗಳ ದರ ಕಡಿಮೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಬಜೆಟ್ ಮಹೋನ್ನತ ಯೋಜನೆಗಳ ಒಂದು ನಿದರ್ಶನ ಎಂದು ಕಾರಜೋಳ ಹೇಳಿದ್ದಾರೆ.

Share this