ಹಿರಿಯ ಪತ್ರಕರ್ತೆ ಕೆ. ಶಾಂತಕುಮಾರಿ ಸೇರಿ ಹಲವರ ಪುಸ್ತಕ ಬಿಡುಗಡೆ

ಸಪ್ತಸಾಗರ ವಾರ್ತೆ, ಬೆಂಗಳೂರು, ಜೂ. 9:
ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ ಮಹಿಳಾ ಮುನ್ನಡೆ ” ಯೋಜನೆಯಡಿ ರಾಜ್ಯದ ಸಾಧಕ ಮಹಿಳೆಯರ 54 ಪುಸ್ತಕಗಳನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಯಿತು.
ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಲಾಯಿತು.
ಈ ಯೋಜನೆ ಅಡಿ ಹಿರಿಯ ಪತ್ರಕರ್ತೆ ಕೆ. ಶಾಂತಕುಮಾರಿ ಬರೆದ ‘ ಕಮಲಾದೇವಿ ಚಟ್ಟೋಪಾಧ್ಯಾಯ ” ಪುಸ್ತಕವು ಬಿಡುಗಡೆಯಾಯಿತು. ಹಿರಿಯ ಪತ್ರಕರ್ತರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪ್ರೋತ್ಸಾಹಿಸಲು ಮತ್ತೊಮ್ಮೆ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಹಾಗೂ ಮಾಜಿ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಪೊನ್ನಪ್ಪ, ಜಗದೀಶ, ಅಂಬಿಕಾ, ಫೋಟೋಗ್ರಾಫರ್ ಜಗದೀಶ, ಪುಸ್ತಕದ ಬರಹಗಾರ್ತಿ ಕೆ. ಶಾಂತಕುಮಾರಿ, ಜುಲ್ಫಿ ಕಾರ್ ಅಹಮದ್, ಗಂಡಸಿ ಸದಾನಂದ ಸ್ವಾಮಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

Share this