ಸಪ್ತಸಾಗರ ವಾರ್ತೆ, ವಿಜಯಪುರ, ಅ. 12:
ನಿವೃತ್ತ ಸರ್ಕಾರಿ ನೌಕರರ ಸೇವೆಗೆ ನಾನು ಸದಾ ಬದ್ಧನಾಗಿರುವೆ ಎಂದು ರಾಜ್ಯ ಸರಕಾರಿ ನಿವೃತ್ತ ಮುಸ್ಲಿಂ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲರಹಿಮ್ ಖಾಜಿ ಹೇಳಿದರು.
ನಗರದ ಯಾಸೀನ್ ಮಸೀದ್ ಹಿಂದುಗಡೆ ಇರುವ ನ್ಯೂ ಲೈಫ್ ಪ್ರೀ ಪ್ರೈಮರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಸರ್ಕಾರಿ ನೌಕರರ ಸಭೆಯಲ್ಲಿ ಅವರು ಮಾತನಾಡಿದರು.
ನಿವೃತ್ತ ಸರಕಾರಿ ನೌಕರರ ಸಮಸ್ಯೆಗಳ ಕುರಿತು ವಿಶೇಷವಾಗಿ ಚರ್ಚಿಸಿ ವಿಜಯಪುರ ಜಿಲ್ಲೆಯ ನಿವೃತ್ತ ನೌಕರರ ಸೇವೆಗಾಗಿ ನಾನು ಸದಾ ಸಿದ್ದ. ಆನ್ಲೈನ್ ಯುಗದಲ್ಲಿ ಪ್ರತಿ ನಿವೃತ್ತ ನೌಕರರು ಪರದಾಡುವ ಪರಿಸ್ಥಿತಿ ಬಂದಿದೆ. ಈ ವೇತನ ತೆಗೆದುಕೊಳ್ಳುವ ಬ್ಯಾಂಕುಗಳಲ್ಲಿ ಪ್ರತ್ಯೇಕ ಕೌಂಟರ ಇಲ್ಲ. ಬಿಸಿಲು ಬೇಗೆ ಎನ್ನದೆ ಕ್ಯೂನಲ್ಲಿ ನಿಲ್ಲುವ ಸ್ಥಿತಿ ಹೀಗೆ ಹತ್ತು ಹಲವಾರು ಸಮಸ್ಯೆಗಳು ನಾವು ಎದುರಿಸುವ ದುಸ್ಥಿತಿ ನಮ್ಮದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲರಹೀಮ ಖಾಜಿ ಹಾಗೂ ಎಸ್.ಎ. ಜಮಾದಾರ ಇವರ ನೇತೃತ್ವದಲ್ಲಿ ಜಿಲ್ಲೆಯ ಹಾಗೂ ತಾಲೂಕುಗಳ ಸಮಿತಿ ರಚನೆ ಮಾಡಲಾಯಿತು.
ಜಿಲ್ಲಾ ಮುಸ್ಲಿಂ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ
ಅಧ್ಯಕ್ಷರಾಗಿ ಅಲ್ಹಜ್ ಇಸಾಕ್ ಅಹ್ಮದ ದಖನಿ, ಹಿರಿಯ ಉಪಾಧ್ಯಕ್ಷರಾಗಿ ರಿಯಾಜಅಹ್ಮದ ಆಲೂರಕರ, ಪ್ರಧಾನ ಕಾರ್ಯದರ್ಶಿಗಳಾಗಿ ನಬಿರಸೂಲ ಹರನಾಳ, ಖಜಾಂಚಿಯಾಗಿ ಎಂ.ಎ. ಬೇಪಾರಿ, ಉಪಾಧ್ಯಕ್ಷರಾಗಿ ಕೆ.ಜಿ. ಮೈಸೂರು ಆಯ್ಕೆಯಾಗಿದ್ದಾರೆ.
ಎಸ್.ಎ. ಜಮಾದಾರ ಸ್ವಾಗತಿಸಿದರು. ನಬಿರಸೂಲ ಹರನಾಳ ನಿರೂಪಿಸಿದರು. ಎನ್.ಬಿ. ಚಟ್ಟರಕಿ ವಂದಿಸಿದರು. ಸಭೆಯಲ್ಲಿ ಆಯ್.ಎಂ. ಮಸಾಲಿ, ಫಜಲ ಮುಲ್ಲಾ, ಎ.ಎಂ. ಕುಮಸಗಿ, ಸೈಯ್ಯದ ಖಾದ್ರಿ, ಎಂ.ಎ. ಗುಲಂದಾಜ, ಉಸ್ಮಾನಗನಿ ಮಕಾನದಾರ, ಎಸ್.ಆಯ್. ನಾಗೂರ, ಎಸ್.ಎಂ. ಮುಜಾವರ, ಎಂ.ಬಿ. ಬಳ್ಳಾರಿ, ಮುಜಮ್ಮಿರ ಮನಗೂಳಿ ಮುಂತಾದವರು ಇದ್ದರು.
ನಿವೃತ್ತ ಸರಕಾರಿ ನೌಕರರ ಸೇವೆಗಾಗಿ ಸದಾಸಿದ್ದ – ಅಬ್ದುಲ್ ರಹಿಮ್ ಖಾಜಿ


