ಬೈಕ್ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ: ಶಿಕ್ಷಕ ದಂಪತಿ ಸಾವು
ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 15:ಬೈಕ್ ಹಾಗೂ ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿಕ್ಷಕ ದಂಪತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ತೊರವಿ ಬಳಿ ನಡೆದಿದೆ.ತಾಲ್ಲೂಕಿನ ಖತಿಜಾಪುರ ಎಚ್.ಪಿ.ಎಸ್ ಶಾಲೆಯ ಜಿಪಿಟಿ ಶಿಕ್ಷಕಿ ಅಂಬಿಕಾ ಪೂಜೇರಿ (34) ಹಾಗೂ ಪತಿ ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗುರಲಿಂಗ ಹುಣಶ್ಯಾಳ (37) ಮೃತಪಟ್ಟ ನತದೃಷ್ಟರು.ಮೃತ ಶಿಕ್ಷಕ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಅನಾಥರಾಗಿದ್ದಾರೆ.ತಿಕೋಟಾದಲ್ಲಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ವಿಜಯಪುರಕ್ಕೆ ಬೈಕ್ ನಲ್ಲಿ ಶಿಕ್ಷಕ…


