ಭುವನೇಶ್ವರದ ಆರ್ಟ್ ಆಫ್ ಗಿವಿಂಗ್ ಸಂಚಾಲಕಿಯಾಗಿ ಶಿಫಾ ಜಮಾದಾರ ನೇಮಕ

ಸಪ್ತಸಾಗರ ವಾರ್ತೆ ವಿಜಯಪುರ, ಮೇ. 10:ಸಮಾಜ ಸೇವೆ, ಯುವ ಸಬಲೀಕರಣ, ನೊಂದವರಿಗೆ ಸೇವೆ ಮಾಡುವ ದಿವ್ಯ ಧ್ಯೇಯೋದ್ದೇಶಗಳನ್ನು ಹೊಂದಿರುವ ದೇಶದ ಪ್ರತಿಷ್ಠಿತ ಭುವನೇಶ್ವರದ ಆರ್ಟ್ ಆಫ್ ಗಿವಿಂಗ್ ಕರ್ನಾಟಕ ಸಂಚಾಲಕರಾಗಿ ವಿಜಯಪುರದ ಕುಮಾರಿಶಿಫಾ ಜಮಾದಾರ ಅವರನ್ನು ನೇಮಕ ಮಾಡಿ ಮಹತ್ವದ ಜವಾಬ್ದಾರಿ ನೀಡಲಾಗಿದೆ.ಇಂಜನಿಯರಿಂಗ್ ಪದವಿಯನ್ನು ವ್ಯಾಸಾಂಗ ಮಾಡುತ್ತಿರುವ ಶಿಫಾ ವಿದ್ಯಾರ್ಥಿ ದೆಸೆಯಲ್ಲಿಯೇಯುವಜನರ ಶ್ರೇಯೋಭಿವೃದ್ಧಿ, ಯುವತಿಯರಿಗೆ ಆರೋಗ್ಯ ಜಾಗೃತಿಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಇತ್ತೀಚಿಗೆ ರಷ್ಯಾದಲ್ಲಿ ನಡೆದ ಯುವ ಶೃಂಗ ಸಭೆಯಲ್ಲಿ ಭಾರತ ದೇಶವನ್ನುಪ್ರತಿನಿಧಿಸಿದ್ದರು. ರಷ್ಯಾ ಅಧ್ಯಕ್ಷ ವಾಡ್ಲೀಮಿರ್ ಪುಟೀನ್ ಚಾಲನೆ…

Read More

ನೈಋತ್ಯ ರೈಲ್ವೆಯಿಂದ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 10:ಪ್ರಯಾಣಿಕರ ಸಾಮರ್ಥ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು, ನೈಋತ್ಯ ರೈಲ್ವೆಯು ಈ ಕೆಳಗಿನ ರೈಲುಗಳಿಗೆ ಶಾಶ್ವತವಾಗಿ ಬೋಗಿಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಪ್ರತಿ ರೈಲಿಗೂ ತಲಾ ಒಂದು ಎಸಿ 3-ಟೈರ್ ಬೋಗಿ, ಮೂರು ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು ಒಂದು ಸಾಮಾನ್ಯ ದರ್ಜೆಯ ಬೋಗಿಗಳನ್ನು ಸೇರಿಸಲಾಗುವುದು.ರೈಲು ಸಂಖ್ಯೆ 16547/16548 ಯಶವಂತಪುರ–ವಿಜಯಪುರ–ಯಶವಂತಪುರ ದೈನಂದಿನ ಎಕ್ಸ್’ಪ್ರೆಸ್ ರೈಲುಗಳಿಗೆ ಐದು ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಇದರೊಂದಿಗೆ ರೈಲಿನ ಒಟ್ಟು ಬೋಗಿಗಳ ಸಂಖ್ಯೆ 13ರಿಂದ 18ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ಸಂಯೋಜನೆಯಲ್ಲಿ…

Read More

ಗುಮ್ಮಟ ನಗರಿಗೆ ಬಂದ ವಿಶ್ವ ದಾಖಲೆ ಬರೆದ ಅತೀ ಚಿಕ್ಕ ಗಾತ್ರದ ಕುಬ್ಜ ಮಹಿಳೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 10 :ಕೇವಲ 62.8 ಸೆಂಟಿಮೀಟರ್ ಉದ್ದವಿರುವ ಜಗತ್ತಿನ ಅತ್ಯಂತ ಕುಬ್ಜ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿರುವ ಜ್ಯೋತಿ ಆಮಗೆ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ.2011ರಲ್ಲಿ ಗಿನ್ನಿಸ್ ಸಂಸ್ಥೆ ಈ ವಿಶ್ವ ದಾಖಲೆಯನ್ನು ದಾಖಲಿಸಿ ಪ್ರಕಟಿಸಿತ್ತು. ಅವರು ಮಹಾರಾಷ್ಟ್ರದನಾಗ್ಪುರದಲ್ಲಿ ಜನಿಸಿದರು ಮತ್ತು ಅವರು ನಟಿಯಾಗಿಯೂ ಕೆಲಸ ಮಾಡುತ್ತಿದ್ದು,ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ಸಾಥ್ ನೀಡಿ ಮತ್ತು ಜನರಿಗೆಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಈ ಎಲ್ಲ ಅಪೂರ್ವ ಸಾಧನೆ ಮಾಡಿರುವ ಅವರು ವಿಜಯಪುರಕ್ಕೆ ಪ್ರಪ್ರಥಮ ಭೇಟಿನೀಡಿದರು.ಈ ವೇಳೆ…

Read More

ರೇಲ್ವೆ ಕೆಳಸೇತುವೆ ನಿರ್ಮಾಣ ವೇಳೆ ಅಗತ್ಯವಾಗಿರುವ ಸೌಕರ್ಯಗಳ‌ ಸ್ಥಳಾಂತರ ಕೇಂದ್ರದ ಜವಾಬ್ದಾರಿ: ಎಂಬಿಪಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 9:ರೇಲ್ವೆ ಕೆಳಸೇತುವೆ ನಿರ್ಮಾಣ ವೇಳೆ ಅಗತ್ಯವಾಗಿರುವ ಸೌಕರ್ಯಗಳ‌ ಸ್ಥಳಾಂತರ(Utility Shifting) ಜವಾಬ್ದಾರಿ ರೇಲ್ವೆ ಇಲಾಖೆಗೆ ಸೇರಿದ್ದು, ಇದರಲ್ಲಿ ರಾಜ್ಯ ಸರಕಾರದ ಪಾತ್ರ ಇರುವುದಿಲ್ಲ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.‌ ಬಿ. ಪಾಟೀಲ ತಿಳಿಸಿದ್ದಾರೆ.ರೇಲ್ವೆ ಇಲಾಖೆ ಕೈಗೊಳ್ಳುವ ಕೆಳಸೇತುವೆ ನಿರ್ಮಾಣ ಸಂದರ್ಭದಲ್ಲಿ ಅಗತ್ಯ ವಿರುವ ವಿದ್ಯುತ್ ಮಾರ್ಗಗಳು, ಒಳಚರಂಡಿ ವ್ಯವಸ್ಥೆ ಹಾಗೂ ಇತರ ಭೂಗತ ಸೌಲಭ್ಯಗಳ ಸ್ಥಳಾಂತರ ಕೆಲಸ ರೇಲ್ವೆ ಇಲಾಖೆ ಕಾಮಗಾರಿಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ‌ದೇಶಾದ್ಯಂತ…

Read More

ನರೇಗಾ ಕಾಮಗಾರಿ ಸ್ಥಳಕ್ಕೆ ಪ್ರಕಾಶ ವಡ್ಡರ ಭೇಟಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ 8 :ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳದಿನ್ನಿ ಗ್ರಾಮದ ಸಮೀಪ ಬಸಿಗಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ್ ಅವರು ಭೇಟಿ ನೀಡಿ ಪರಿಶೀಲಿಸಿದರು.ಇದೇ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮಸ್ಟರ್ ರೂಲ್ ಹಾಗೂ ಫೋಟೊ ಆಧಾರಿತ ಹಾಜರಾತಿ ಪರಿಶೀಲಿಸಿದರು.ಕೂಲಿಕಾರರೊಂದಿಗೆ ಸಂವಾದ ನಡೆಸಿದ ಅವರು, ಈ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ಹೂಳೆತ್ತುವ ಕಾಯಕದಲ್ಲಿ ಮಗ್ನರಾಗಿದ್ದ ಕೂಲಿಕಾರರು ತಮ್ಮ ಕೆಲಸದ…

Read More

ಮೇ .14ರಂದು ಫೋನ್-ಇನ್ ಕಾರ್ಯಕ್ರಮ

ಸಪ್ತಸಾಗರ ವಾರ್ತೆ ವಿಜಯಪುರ,ಮೇ.8:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಅಹವಾಲು ಮತ್ತು ಕುಂದುಕೊರತೆಗಳನ್ನು ಆಲಿಸಲು ಮೇ 14ರಂದು ಮಧ್ಯಾಹ್ನ 3.30 ರಿಂದ 4.00ರವರೆಗೆ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ದೂರವಾಣಿ 6366423887 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ, ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು, ಸಾರ್ವಜನಿಕರು ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಎಲ್.ಇ.ಡಿ ದೀಪ ಅಳವಡಿಕೆ ಯೋಜನೆಯಿಂದ ಪಾಲಿಕೆ ಆರ್ಥಿಕ ಹೊರೆ ಇಳಿಕೆ: ಯತ್ನಾಳ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 7: ನಗರದಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ ಕೇಂದ್ರಿಕೃತ ಚಾಲನೆ ಮತ್ತು ನಿರ್ವಹಣೆಯುಳ್ಳ ಇಂಧನ ಕ್ಷಮೆತೆಯ ಎಲ್.ಇ.ಡಿ ದೀಪಗಳನ್ನು ಅಳವಡಿಸುವ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದ ಸುಮಾರು 36.36 ಕೋಟಿ ಮೊತ್ತದ ಎಲ್.ಇ.ಡಿ ದೀಪಗಳ ಅಳವಡಿಕೆ ಯೋಜನೆ ಅನುಷ್ಠಾನಗೊಳಿಸಲು ಅನುಮೋದಿಸಿರುವುದಾಗಿ ಗುರುವಾರ ವಿಧಾನಸೌಧದಲ್ಲಿ ಜರುಗಿದ ಅರ್ಜಿಗಳ ಸಮಿತಿ ಸಭೆಗೆ ಹಾಜರಿದ್ದ…

Read More

ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ:ಎಂಬಿಪಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 7:ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ. ಈ ಅನುಭವ ಮಂಟಪದಲ್ಲಿ ಎಲ್ಲ ಜಾತಿ-ಜನಾಂಗಗಳಿಗೆ ಸಮಸ್ಥಾನ. ಆ ಸಾಮಾಜಿಕ ಹಿನ್ನಲೆಯನ್ನು ಅನುಸರಿಸಿ ಬಹಳಷ್ಟು ಹಿಂದುಳಿದ ಸಮಾಜಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಕಾರ್ಯ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬರಲಿವೆ ಎಂದು ಕೈಗಾರಿಕೆ,‌ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಗುರುವಾರ ವಿಜಯಪುರ ನಗರದ ಗೃಹ ಕಚೇರಿಯಲ್ಲಿ ತಿಕೋಟಾ ಪಟ್ಟಣದ ತಳವಾರ…

Read More

ಭಾಷೆಯು ಬದುಕಿನ ಅನುಭವದ ಜೀವಾಳ : ಚಿಂತಕ ಲಕ್ಷ್ಮೀಶ ತೋಳ್ಪಾಡಿ

ಸಪ್ತಸಾಗರ ವಾರ್ತೆ,ಬೆಳಗಾವಿ, ಮೇ. 7: ಭಾಷೆ ಎನ್ನುವುದು ಒಂದು ಜೀವಂತ ಪದಾರ್ಥ. ಅದು ನಮ್ಮ ಜೀವನದ ಪ್ರತಿ ಅನುಭವದ ಜೀವಾಳ, ಅದನ್ನು ಬಹಳ ಮುತುವರ್ಜಿಯಿಂದ ಮನಸ್ಸಿನಿಂದ ಬಳಸಬೇಕು. ತಾಂತ್ರಿಕವಾಗಿ ಭಾಷೆಯನ್ನು ಬಳಸುವುದರಿಂದ ಸೃಜನಶೀಲತೆ ಅರಳುವುದಿಲ್ಲ ಎಂದು ಸಂಸ್ಕೃತಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘ, ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಕನ್ನಡ ಸಾಹಿತ್ಯ: ಮೌಲ್ಯ” ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸಾಹಿತ್ಯ ಮತ್ತು ತತ್ವಜ್ಞಾನಕ್ಕೆ ಸಮಾನವಾದ ಸ್ಥಾನವಿದೆ….

Read More

ಮಕ್ಕಳು ದೇಶದ ಆಸ್ತಿ, ಅವರನ್ನು ಪ್ರೀತಿಯಿಂದ ಬೆಳೆಸಿ-ಮೇಜರ್ ಎಸ್.ಸಿ. ಆನಂದ

ಸಪ್ತಸಾಗರ ವಾರ್ತೆ ವಿಜಯಪುರ,ಮೇ. 7 : “ಮಕ್ಕಳನ್ನು ಕೇವಲ ಒಳ್ಳೆಯ ಶಾಲೆಗೆ ಸೇರಿಸಿದರೆ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ದೈನಂದಿನ ಚಟುವಟಿಕೆಗಳನ್ನು ಗಮನಿಸಿ, ಅವರಲ್ಲಿ ನಾಗರಿಕ ಪ್ರಜ್ಞೆ ಹಾಗೂ ಸಂಸ್ಕಾರ ಬೆಳೆಸುವುದು ತಂದೆ-ತಾಯಂದಿರ ಆದ್ಯ ಕರ್ತವ್ಯವಾಗಿದೆ,” ಎಂದು ಮೇಜರ್ ಎಸ್ ಸಿ ಆನಂದ ಅಭಿಪ್ರಾಯಪಟ್ಟರು. ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ, ಶಾಂತಿ ಕುಟೀರ ಟ್ರಸ್ಟ್ ಹಾಗೂ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಸಂಡೂರು ಮತ್ತು ಭಾರತೀಯ ಸುರಾಜ್ಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಶೈಕ್ಷಣಿಕ…

Read More