ಚಿತ್ರಕಲೆಯ ಮೂಲಕ ಕಲಾತ್ಮಕ ಅಭಿವ್ಯಕ್ತಿ ಸಾಧ್ಯ- ಅಂಬಾದಾಸ ಜೋಶಿ ಅಭಿಮತ
ಸಪ್ತಸಾಗರ ವಾರ್ತೆ, ವಿಜಯಪುರ, ನ. 25:ಚಿತ್ರಕಲೆ ಮೂಲಕ ಕಲಾತ್ಮಕ ಅಭಿವ್ಯಕ್ತಿ ಸಾಧ್ಯ ಎಂದು ಸಮಾಜ ಸೇವಕ ಅಂಬಾದಾಸ ಜೋಶಿ ಅಭಿಪ್ರಾಯ ಪಟ್ಟರು.ವಿಜಯಪುರದ ರೇಡಿಯಂಟ್ ಪಿಯು ಕಾಲೇಜು ಮತ್ತು ನೀಟ್ ಅಕಾಡೆಮಿಯಲ್ಲಿ ಉದ್ದೇಶಪೂರಿತ ಹಾಗೂ ಸೃಜನಾತ್ಮಕ ಚಿತ್ರಕಲಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಕಲಾತ್ಮಕ ಅಭಿವ್ಯಕ್ತಿಯ ಜೊತೆಗೆ ಸೌಂದರ್ಯಬೋಧ ಮತ್ತು ಸೃಜನಶೀಲತೆಯ ವಿಕಾಸವನ್ನು ಉತ್ತೇಜಿಸುವುದಾಗಿತ್ತು ಎಂದೂ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಅಂಬಾದಾಸ ಜೋಶಿ ಅವರನ್ನು ಆಹ್ವಾನಿಸಲಾಯಿತು. ಅವರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ…


