ಶಂಕರಾಚಾರ್ಯರು ಜ್ಞಾನ, ಕರ್ಮ, ಭಕ್ತಿಯ ಸಂಗಮ-ಸಂತೋಷ ಬಂಡೆ
ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:ಶಂಕರರ ಜೀವನ-ಸಾಧನೆ ನಿಜಕ್ಕೂ ಅದ್ವಿತೀಯ. ಅವರು ಜ್ಞಾನ, ಕರ್ಮ, ಭಕ್ತಿಯ ಸುಂದರ ಸಂಗಮ. 21 ನೇ ಶತಮಾನದ ಅಶಾಂತ ಜಗತ್ತಿಗೆ, ಅವರ ಶಾಂತಿಯುತ ಮತ್ತು ಸಮಗ್ರ ಜೀವನ ವಿಧಾನವೇ ನಿಜವಾದ ದಾರಿದೀಪ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಮಂಗಳವಾರ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶಂಕರಾಚಾರ್ಯರ ಜಯಂತಿ ಆಚರಣೆ ಉದ್ಧೇಶಿಸಿ ಅವರು ಮಾತನಾಡಿದರು.ಭೌತಿಕ ವಸ್ತುಗಿಂತ ಆಧ್ಯಾತ್ಮಿಕ ಸಾಧನೆಗೆ ಆದ್ಯತೆ ನೀಡಬೇಕು. ಭಿನ್ನಾಭಿಪ್ರಾಯ ಮರೆತು, ಸಾಮರಸ್ಯದಿಂದ ಬದುಕುವ ಮಾರ್ಗವನ್ನು…


