ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ. ಬಾಬುರಾಜೇಂದ್ರ ನಾಯಿಕ ಅಭಿಮತ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:ಆದರ್ಶ ನಗರದ ಸೇವಾಲಾಲ ದೇವಸ್ಥಾನದಲ್ಲಿ ಸಂತ ಶ್ರೀ ಸೇವಾಲಾಲ ಮಾಲಾಧಾರಿಗಳ ವತಿಯಿಂದ ಸೇವಾಲಾಲರ 287 ನೇ ಜಯಂತಿ ಅಂಗವಾಗಿ ಮಹಾಭೋಗ ಮತ್ತು ದೀಪೋತ್ಸವ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಡಾ.ಬಾಬುರಾಜೇಂದ್ರ ನಾಯಿಕ ಸತತವಾಗಿ ಆರು ವರ್ಷಗಳಿಂದ ನಡೆಯುತ್ತಿರುವ ವಿಜಯಪುರ ಜಿಲ್ಲೆ ಮಾಲಾ ಅಭಿಯಾನಕ್ಕೆ ವ್ಯಾಪಕವಾದ ಸ್ಪಂದನೆ ಸಿಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಾಲಾಧಾರಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೇವಲ 30 ಜನರಿಂದ ಆರಂಭವಾದ ಈ ಮಾಲಾ ಅಭಿಯಾನ ಈ ವರ್ಷ ಸಾವಿರಾರು ಜನ ಸೇವಾಲಾಲರ ಮಾಲೆ…


