ಶ್ರೀ ಉತ್ತರಾದಿ ಮಠ ಹಾಗೂ ಶ್ರೀ ರಾಯರ ಮಠದ ಮಧ್ಯದ ವ್ಯಾಜ್ಯಕ್ಕೆ ಇತಿಶ್ರೀ-ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃಧ್ಧಿ ಸಂಘ ಸ್ವಾಗತ
ಸಪ್ತಸಾಗರ ವಾರ್ತೆ, ವಿಜಯಪುರ, ಜ. 6: ರಾಷ್ಟ್ರದ ಹಿತಕ್ಕಾಗಿ, ಸನಾತನ ಧರ್ಮದ ಮತ್ತು ಬ್ರಾಹ್ಮಣ ಸಮಾಜದ ಒಗ್ಗಟ್ಟು ಹಾಗೂ ಉನ್ನತಿಗಾಗಿ ಶ್ರೀ ಉತ್ತರಾದಿ ಮಠ ಹಾಗೂ ಶ್ರೀ ರಾಯರ ಮಠದ ಮಧ್ಯದಲ್ಲಿ ಸುಮಾರು ಐದು ದಶಕಗಳ ಅವಧಿಯ ಸುದೀರ್ಘ ಲೌಕಿಕ ವ್ಯಾಜ್ಯಕ್ಕೆ ಉಭಯ ಶ್ರೀಪಾದಂಗಳವರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮತ್ತು ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಭಾನುವಾರ ಇತಿಶ್ರೀ ಹಾಡಿದ ಪ್ರಸಂಗ ಅತ್ಯಂತ ಸಂತಸದಾಯಕ ಮತ್ತು ಸಂಭ್ರಮಿಸತಕ್ಕ ವಿಷಯವಾಗಿದೆ ಎಂದು…


