ದೇಶೀಯ ಎಲ್ಪಿಜಿ ಕಾಳಸಂತೆಗೆ ಕಡಿವಾಣ: ಅಕ್ರಮ ಬಳಕೆ ತನಿಖೆಗೆ ಕೇಂದ್ರದ ಸೂಚನೆ; ಪೆಟ್ರೋಲಿಯಂ ಸಚಿವಾಲಯಕ್ಕೆ ದೂರು ರವಾನೆ
ಸಪ್ತಸಾಗರ ವಾರ್ತೆ,ನವದೆಹಲಿ, ಆ.8: ದೇಶೀಯ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹಾಗೂ ವಾಹನಗಳಿಗೆ ಅಕ್ರಮವಾಗಿ ಬಳಸುತ್ತಿರುವುದು, ಕಾಳಸಂತೆ ನಡೆಸುತ್ತಿರುವುದು ಮತ್ತು ಇದರಿಂದ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟಾಗುತ್ತಿರುವ ಆರೋಪಗಳ ಕುರಿತು ಕೇಂದ್ರ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ.ಈ ಸಂಬಂಧ ಗ್ರಾಹಕ ದಕ್ಷತಾ ಕಲ್ಯಾಣ್ ಫೌಂಡೇಶನ್ ಸಲ್ಲಿಸಿರುವ ದೂರು ಹಾಗೂ ಪುರಾವೆಗಳನ್ನು ಪರಿಶೀಲನೆಗಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ರವಾನಿಸಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ,…


