ಗಡಿನಾಡು ಚೇತನ ಪ್ರಶಸ್ತಿಗೆ ಸಾಹಿತಿ ಎನ್.ಆರ್. ಕುಲಕರ್ಣಿ ಆಯ್ಕೆ
ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 4: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ 2025-26ನೇ ಸಾಲಿನ ಗಡಿನಾಡು ಚೇತನ ಪ್ರಶಸ್ತಿಗೆ ವಿಜಯಪುರ ನಿವಾಸಿ ಗಡಿ ನಾಡು ಭಾಗದಲ್ಲಿ ಕನ್ನಡ ಸೇವೆ ಗೈದ ನಾಗೇಶ ಆರ್. ಕುಲಕರ್ಣಿ ಆಯ್ಕೆಯಾಗಿದ್ದಾರೆ.ಫ.ಗು.ಹಳಕಟ್ಟಿ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಗೆ ವಿಜಯಪುರದವರೇ ಆಯ್ಕೆಯಾಗಿರುವದು ವಿಶೇಷವಾಗಿದೆ.ಪ್ರಶಸ್ತಿ ತಲಾ 1ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ, ಫಲ ತಾಂಬೂಲ ಒಳಗೊಂಡಿದೆ.ಮಹಾರಾಷ್ಟ್ರ ಸರಕಾರದ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಎನ್.ಆರ್. ಕುಲಕರ್ಣಿಯವರು ಮೂಲತ:…


