ಸಪ್ತಸಾಗರ ವಾರ್ತೆ ವಿಜಯಪುರ, ಅ. 13:
ವೋಟ್ ಚೋರಿ ವಿರುದ್ಧ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಅವರ ನೇತೃತ್ವದಲ್ಲಿ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಮಾತನಾಡಿ, ಇವತ್ತು ಮತಗಳ್ಳತನ ಮಾಡುವುದರ ಮೂಲಕ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಹಾಗೂ ನಮ್ಮ ವಿಜಯಪುರ ನಗರದಲ್ಲಿಯೂ ಕೂಡ ಮತಗಳ್ಳತನ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಪ್ರಯತ್ನಿಸಿರುವದು ಅತ್ಯಂತ ಹೀನಕೃತ್ಯ. ಇದು ಒಬ್ಬ ವ್ಯಕ್ತಿಯ ಅವಮಾನ ಅಲ್ಲ. ನಮ್ಮ ದೇಶದ ನ್ಯಾಯಾಂಗಕ್ಕೆ ಆದ ಅವಮಾನ. ಸಂವಿಧಾನದ ಮೌಲ್ಯಗಳು ಮತ್ತು ಕಾನೂನಿನ ಶ್ರೇಷ್ಠತೆಯ ಮೇಲಿನ ದಾಳಿಯಾಗಿದೆ. ಆದ್ದರಿಂದ ತಪ್ಪಿತಸ್ಥ ವಕೀಲನ ಮೇಲೆ ಕಾನೂನು ರೀತಿ ಕಠಿಣಕ್ರಮ ಆಗಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಕೀಲ ಬಾಗಮಾರೆ ಮಾತನಾಡಿದರು.
ಪ್ರತಿಭಟನೆಯಲ್ಲಿ ಚಾಂದಸಾಬ ಗಡಗಲಾವ, ದೇಸು ಚವ್ಹಾಣ, ವಸಂತ ಹೊನಮೊಡೆ, ರಾಕೇಶ ಕಲ್ಲೂರ, ಮಹಾದೇವ ಛಲವಾದಿ, ಕೃಷ್ಣಾ ಲಮಾಣಿ, ಕೃಷ್ಣಾ ಕಾಮಟೆ, ಮಲ್ಲಿಕಾರ್ಜುನ ಮಡ್ಡಿಮನಿ, ಮುತ್ತು ಬತ್ತಾಸೆ, ಪರಶುರಾಮ ಜಮಖಂಡಿ, ವಿಠ್ಠಲ ಸಂದಿಮನಿ, ಮಹಾದೇವ ಲಿಂಗದಳ್ಳಿ, ಬಸವರಾಜ ಛಲವಾದಿ, ಭಾರತಿ ಹಡಪದ, ಹರೀಶ ಕೌಲಗಿ, ಕಣಮುಚನಾಳ, ಧರ್ಮರಾಜ ಹೊಸೂರ, ಸರ್ಫರಾಜ ಅಗಸಬಾಳ, ಲಕ್ಷ್ಮಿ ಕ್ಷೀರಸಾಗರ, ಗುಲಾಬ ಚವ್ಹಾಣ, ಖಾಜಾ ಬಾಗವಾನ, ಅಬಿದ ಇಲಕಲ್, ಬಿ.ಎಂ. ಮಕ್ತೇದಾರ, ಹಮಿದಾ ಪಟೇಲ, ಸುನಂದಾ ಯಂಪೂರೆ, ರೇವಪ್ಪ ಬತ್ತಾಸೆ, ಸಿದ್ದು ಹಿರೇನಾಯಕ, ವೆಂಕಟೇಶ ಕಲಾಲ, ಮಾನಿಂಗ ಜವನರ, ಪರಸು ಡೊಳ್ಳಿ, ಲೋಕೇಶ ಜವನರ, ಎಸ್.ಎಂ. ನಾಗಠಾಣ ಮುಂತಾದವರು ಉಪಸ್ಥಿತರಿದ್ದರು.
ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ


