ಸಪ್ತಸಾಗರ ವಾರ್ತೆ, ವಿಜಯಪುರ, ಅ. 25:
ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿಯು ಶನಿವಾರ 38 ನೇ ದಿನಕ್ಕೆ ಕಾಲಿಟ್ಟಿದೆ.
ಈ ಒಂದು ಹೋರಾಟಕ್ಕೆ ಸ್ವ ಸಹಾಯ ಸಂಘದ ಮಹಿಳೆಯರು ಬೆಂಬಲ ಸೂಚಿಸಿದರು.
ಹೋರಾಟದ ಸದಸ್ಯರಾದ, ಅಕ್ರಂ ಮಾಶಾಳಕರ, ಸಿದ್ದಲಿಂಗ ಬಾಗೇವಾಡಿ, ಸುರೇಶ ಬಿಜಾಪುರ, ಜಗದೇವ ಸೂರ್ಯವಂಶಿ, ಗಿರೀಶ ಕಲಘಟಗಿ, ಸಿದ್ರಾಮ ಹಿರೇಮಠ, ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಬಟಗಿ, ಭೋಗೇಶ ಸೋಲಾಪುರ, ಪ್ರಭುಗೌಡ ಪಾಟೀಲ,ಅಬ್ದುಲ್ ರೆಹಮಾನ್, ಸಂಜು ಶೆಟಗಾರ, ಪ್ರಕಾಶ ಸಬರದ, ಉಮೇಶ ಪಟ್ಟಣಶೆಟ್ಟಿ , ಶಿವಬಾಲಮ್ಮ ಕೊಂಡಗೂಳಿ, ಗೀತಾ ಹೆಚ್., ಸಿದ್ರಾಮ ಹಳ್ಳೂರ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.
ಸರಕಾರಿ ವೈದ್ಯಕೀಯ ಕಾಲೇಜ್: ಧರಣಿ 38ನೇ ದಿನಕ್ಕೆ


