ಸಂಧಿವಾತ ರೋಗಗಳ ಬಗ್ಗೆ ಜಾಗೃತಿ ಅಗತ್ಯ: ಡಾ. ರಮೇಶ ಜೋಯಿಸ್
ಸಪ್ತಸಾಗರ ವಾರ್ತೆ, ಬೆಂಗಳೂರು, ಏ. 26ಸಂಧಿವಾತ ಹಾಗೂ ಇತರೆ ರುಮಾಟಾಲಜಿ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವೆಂದು ಕರ್ನಾಟಕ ರುಮಾಟಾಲಜಿ ಅಸೋಸಿಯೇಷನ್ ಅಧ್ಯಕ್ಷ ಡಾ ರಮೇಶ್ ಜೋಯಿಸ್ ತಿಳಿಸಿದರು.ನಗರದ ಲಾಲ್ಬಾಗ್ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಸಂಧಿವಾತಶಾಸ್ತ್ರ ಜಾಗೃತಿ ವಾಕಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಧಿವಾತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಅತ್ಯಂತ ಮುಖ್ಯ.ಇಂತಹ ಕಾಯಿಲೆಗಳು ವಿರಳವೆಂದು ಹಲವರು ಭಾವಿಸಿದರೂ, ಸರಿಯಾದ ಪರಿಶೀಲನೆ ಇಲ್ಲದಿದ್ದರೆ ಅವು ಗುರುತಾಗುವುದೇ ಇಲ್ಲ. ಲೂಪಸ್, ವಾಸ್ಕುಲೈಟಿಸ್, ಸ್ಕ್ಲೆರೋಡರ್ಮಾ ಮುಂತಾದ ರೋಗಗಳು…


