ಶಾಸಕ ಬಸನಗೌಡರಿಗೆ ಶ್ರೀಕೃಷ್ಣಮಠದಿಂದಗೌರವ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 13:ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಖಿಲ ಭಾರತ ಮಾಧ್ವ ಮಹಾಮಂಡಳ ವಿದ್ಯಾರ್ಥಿ ನಿಲಯಕ್ಕೆ ತಮ್ಮ ಶಾಸಕ ನಿಧಿಯಿಂದ ರೂ.25 ಲಕ್ಷ ಮಂಜೂರಿ ಮಾಡಿದ್ದನ್ನು ಪರಿಗಣಿಸಿ ನಗರದ ಶ್ರೀಕೃಷ್ಣ-ವಾದಿರಾಜ ಮಠದಿಂದ ಶೇಷವಸ್ತ್ರ ಫಲ ನೀಡಿ ಗೌರವಿಸಲಾಯಿತು.ಶ್ರೀ ಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಬಸನಗೌಡರು ವಿದ್ಯಾರ್ಥಿ ನಿಲಯ ಮತ್ತು ಶ್ರೀಕೃಷ್ಣ ಮಠಕ್ಕೆ ಅನುದಾನ ನೀಡುತ್ತ ಬಂದಿದ್ದಾರೆ. ಮಠದ ಕಟ್ಟಡಕ್ಕೂ ಅವರು ರೂ.10 ಲಕ್ಷ ದೇಣಿಗೆ ಕೊಟ್ಟಿದ್ದರು….


