ನಂಜನಗೂಡು ಮಠದಲ್ಲಿ ಶ್ರೀ ಸುಯತೀಂದ್ರರ ಆರಾಧನೆ
ಸಪ್ತಸಾಗರ ವಾರ್ತೆ,ವಿಜಯಪುರ,ಮಾ. 8:ನವಮಂತ್ರಾಲಯದ ರೂವಾರಿ ಶ್ರೀ ಸುಯತೀಂದ್ರ ಶ್ರೀಪಾದಂಗಳವರ ಆರಾಧನೆಯನ್ನು ಭಾನುವಾರ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅತ್ಯಂತ ಭಕ್ತಪೂರ್ವಕವಾಗಿ ಆಮಂತ್ರಿತ ಭಕ್ತರ ಸಮ್ಮುಖದಲ್ಲಿ ಆಚರಿಸ ಲಾಯಿತು.ಅದರಂಗವಾಗಿ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ನಡೆದು, ಬಳಿಕ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡ ಲಾಯಿತು. ಬಳಿಕ ಪ್ರಲ್ಹಾದರಾಜರಿಗೆ ಕನಕಾಭಿಷೇಕ ನಡೆದು, ಶ್ರೀ ಸುಯತೀಂದ್ರರ ಭಾವಚಿತ್ರವನ್ನಿಟ್ಟ ರಥೋತ್ಸವ ಜರುಗಿತು.2009ರಲ್ಲಿ ಪೀಠಾಧಿಕಾರಿಗಳ ಅವಧಿಯಲ್ಲಿ ಶತಮಾನ ಕಂಡರಿಯದ ಪ್ರವಾಹದಿಂದ ತಲ್ಲಣಿಸಿದ ಮಂತ್ರಾಲಯ ಪುಣ್ಯಕ್ಷೇತ್ರ ನಿರ್ಮಿಸಿದ ಪರಿಯಲ್ಲೆ ಶ್ರೀ ಸುಯತೀಂದ್ರತೀರ್ಥರು ತಾವು…


