ಮಠಗಳ ಕಾರ್ಯ ಅನನ್ಯ: ಡಾ. ಸಂಗಮೇಶ ಮೇತ್ರಿ
ಸಪ್ತಸಾಗರ ವಾರ್ತೆ,ಇಂಡಿ, ಜು. 25:ಮಠಗಳು ತಮ್ಮ ಅಸ್ತಿತ್ವ ಉಳಿಸಿಕೊಂಡು ಸಾಮಾಜಿಕ ಪರಿವರ್ತನೆಗೆ ಕಾರಣವಾಗಿ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬಂದಿವೆ ಎಂದು ಸಾಹಿತಿ ಡಾ ಸಂಗಮೇಶ ಮೇತ್ರಿ ಹೇಳಿದರು.ಶನಿವಾರ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ಇಂಡಿ ತಾಲೂಕಿನ ಮಠ ಮಾನ್ಯಗಳು’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಹಾಗೂ ಶಿಕ್ಷಣ ಬಿತ್ತುವಲ್ಲಿ, ಸಂಸ್ಕೃತಿ ಹಂಚುವಲ್ಲಿ ಇಂಡಿ ತಾಲೂಕಿನ ಹಲವು ಮಠಗಳು ಕೆಲಸ ಮಾಡಿವೆ….


