ವಿದ್ಯಾದಾನ ಅತಿ ಶ್ರೇಷ್ಠ: ರಕ್ಷಿತಾ ರಾಜು
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 3 :ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವಕ ಯುವತಿಯರಿಗೆ ಪ್ರೇರಣೆಯ ಚಿಲುಮೆ ಎಂಬಂತೆ, “ಬ್ರೆಕಿಂಗ್ ಬ್ಯಾರಿಯರ್ಸ್ ಆನ್ ಇನ್ಸ್ಪೈರಿಂಗ್ ಇಂಟರಾಕ್ಷನ್ ವಿತ್ ಇಂಟರ್ನ್ಯಾಷನಲ್ ಪ್ಯಾರಾ ಅಥ್ಲೆಟ್” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿ ಕುಮಾರಿ ರಕ್ಷಿತಾ ರಾಜು ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟ್,ಬೆಂಗಳೂರು ಇವರು ಮಾತನಾಡಿ, ಉಳ್ಳವರು ಶಿವಾಲಯವ ಮಾಡುವರು ಎಂಬ ಬಸವಣ್ಣನವರ ವಚನದಂತೆ ಶಾರೀರಿಕ ಮಿತಿಗಳು ನಮ್ಮ ಸಾಧನೆಯನ್ನು ಅಡ್ಡಿಪಡಿಸಲಾರವು. ನಮ್ಮಲ್ಲಿ ಯಾವ ಶಕ್ತಿ ಇಲ್ಲ…


