ಅಹಿಂದ ವಿದ್ಯಾರ್ಥಿ ಪರಿಷತ್ ಘಟಕಕ್ಕೆ ರಾಜ್ಯಾಧ್ಯಕ್ಷರಾಗಿ ಶಂಕರ ವಡ್ರೆ ಆಯ್ಕೆ
ಸಪ್ತಸಾಗರ ವಾರ್ತೆ ವಿಜಯಪುರ, ಡಿ. 9:ಅಹಿಂದ ವಿದ್ಯಾರ್ಥಿ ಪರಿಷತ್ ಘಟಕದ ರಾಜ್ಯಾದ್ಯಕ್ಷರಾಗಿ ಶಂಕರ ಘೋರಕನಾಥ ವಡ್ರೆ ಮರಗೂರ ಅವರು ಆಯ್ಕೆಯಾಗಿದ್ದಾರೆ.ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟ (ರಿ) ಬೆಂಗಳೂರು ರಾಜ್ಯಾದ್ಯಕ್ಷ ಪ್ರಭುಲಿಂಗ ದೊಡ್ಡಿಣಿ ಅವರ ಆದೇಶದ ಮೇರೆಗೆ ಅಹಿಂದ ವಿದ್ಯಾರ್ಥಿ ಪರಿಷತ್ ಘಟಕ ರಾಜ್ಯಾದ್ಯಕ್ಷರನ್ನಾಗಿ ಶಂಕರ ಘೋರಕನಾಥ ವಡ್ರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬೀರಲಿಂಗೇಶ್ವರ ಪೂಜಾರಿ ಹಾಗೂ ವಿಠ್ಠಲ ಬಿರಾದಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


