ಮನರೇಗಾ ಕೂಲಿಕಾರರ ಇಕೆವೈಸಿಯಲ್ಲಿ ಶೇ. 100 ಪ್ರಗತಿ ಸಾಧಿಸಲು ವಿಶೇಷ ಅಭಿಯಾನ: ಬಸವಂತರಾಯಗೌಡ ಬಿರಾದಾರ

ಸಪ್ತಸಾಗರ ವಾರ್ತೆ, ತಿಕೋಟಾ, ಫೆ. 17: ತಾಲೂಕು ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೊಂದಣಿಯಾದ ಎಲ್ಲಾ ಕೂಲಿಕಾರರ ಇಕೆವೈಸಿಯನ್ನು ಸಂಪೂರ್ಣವಾಗಿ ಪ್ರಗತಿ ಸಾಧಿಸಲು ತಾಲೂಕಿನಾದ್ಯಂತ ಫೆಬ್ರುವರಿ 27ರ ವರೆಗೆ ವಿಶೇಷ ಅಭಿಯಾನ ಆಯೋಜನೆ ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಅವರು ತಿಳಿಸಿದ್ದಾರೆ.ಸರ್ಕಾರದ ಸೂಚನೆಯ ಅನ್ವಯ ಯೋಜನೆಯಡಿ ಕೆಲಸ ನಿರ್ವಹಿಸತಕ್ಕ ಅರ್ಹ ಎಲ್ಲಾ ಕೂಲಿಕಾರರ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಆದ್ಯತೆಯ ಮೇಲೆ ನೋಂದಾಯಿತ ಎಲ್ಲಾ ಅರ್ಹ ಕೂಲಿಕಾರರ e-KYC ಅಪ್ಲೋಡ್ ಅನ್ನು ಫೆ. 27…

Read More