
ಭೀಮಾ ನದಿಗೆ ಹಾರಿ ಮಹಿಳೆ ಆತ್ಮಹತ್ಯ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 4: ಸೊಲ್ಲಾಪುರ -ವಿಜಯಪುರ ಗಡಿಯ ಭೀಮಾ ನದಿಗೆ ಕಟ್ಟಲಾಗಿರುವ ಬ್ಯಾರೇಜ್ ಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತ ಮಹಿಳೆಯನ್ನು ಇಂಡಿ ಪಟ್ಟಣದ ಬೀರಪ್ಪನಗರ ನಿವಾಸಿ ಸುಶಿಲಾಬಾಯಿ ಶಾಂತಪ್ಪ ಬಿರಾದಾರ (62) ಎಂದು ಗುರುತಿಸಲಾಗಿದೆ.ವಿಜಯಪುರ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಭೀಮಾನದಿ ಬ್ಯಾರೇಜ್ ಮೇಲಿನಿಂದ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಮೃತ ಮಹಿಳೆಯ ಪತಿ ಮನೆ ಇಂಡಿ ಪಟ್ಟಣದಲ್ಲಿದ್ದು, ತವರು ಮನೆ ಸೊಲ್ಲಾಪುರ ಜಿಲ್ಲೆಯ ಟಾಕಳಿಯಲ್ಲಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು,…