ಕಾಖಂಡಕಿ ಶ್ರೀ ಗುರುದೇವಾಶ್ರಮದಲ್ಲಿ ಮೂರು ದಿನಗಳ ಆಧ್ಯಾತ್ಮಿಕ ಶಿಬಿರ ಯಶಸ್ವಿ
ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 28:ಕಾಖಂಡಕಿ ಗ್ರಾಮದ ಶ್ರೀ ಗುರುದೇವಾಶ್ರಮದಲ್ಲಿ ಪೂಜ್ಯ ಶ್ರೀ ಶಿವಯೋಗೀಶ್ವರ ಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲಿ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ೨೦ ಶಿಬಿರಾರ್ಥಿಗಳಿಗೆ ಮೂರು ದಿನಗಳ ಆಧ್ಯಾತ್ಮಿಕ ಶಿಬಿರ ಯಶಸ್ವಿಯಾಗಿ ನೆರವೇರಿತು.ಈ ಶಿಬಿರವು ಆಧ್ಯಾತ್ಮಿಕ ಜ್ಞಾನ ಮತ್ತು ಸಾಮಾಜಿಕ-ಪರಿಸರ ಜಾಗೃತಿಯನ್ನು ಒಟ್ಟುಗೂಡಿಸುವ ಉದ್ದೇಶದಿಂದ ನಡೆಯಿತು.ಶಿಬಿರದ ಅವಧಿಯಲ್ಲಿ ಪೂಜ್ಯ ಶ್ರೀ ಶಿವಯೋಗೀಶ್ವರ ಸ್ವಾಮೀಜಿಗಳು ಪತಂಜಲಿ ಯೋಗ ಸೂತ್ರಗಳು ಕುರಿತು ಆಳವಾದ ಮಾರ್ಗದರ್ಶನ ನೀಡಿದರು. ಮನಸ್ಸಿನ ಶಿಸ್ತು, ಆತ್ಮಜ್ಞಾನ ಮತ್ತು ಆಂತರಿಕ ಶಾಂತಿಗೆ ದಾರಿ ಎಂಬ ವಿಷಯಗಳನ್ನು…


