ಕ್ರೂಸರ್ ಅಟ್ಟಹಾಸಕ್ಕೆ ಬೈಕ್ ಸವಾರ ಬಲಿ
ಸಪ್ತಸಾಗರ ವಾರ್ತೆ,ವಿಜಯಪುರ, ಆ.9: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕ್ರೂಸರ್ ಜೀಪ್ವೊಂದು ಬೈಕ್ ಹಾಗೂ ಗೂಡ್ಸ್ ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಬಾಗಲಕೋಟೆ ರಸ್ತೆಯ ದಾತ್ರಿ ಮಸೀದಿ ಬಳಿ ಶನಿವಾರ ರಾತ್ರಿ ನಡೆದಿದೆ.ಜಂಬಗಿ ಕೆ.ಡಿ. ಗ್ರಾಮದ ನಿವಾಸಿ, ಸದ್ಯ ವಿಜಯಪುರದಲ್ಲಿ ವಾಸವಿರುವ ಬಸವರಾಜ ಸದಾಶಿವ ದಳವಾಯಿ ಎಂಬಾತ ಕೆಎ-29-4418 ಸಂಖ್ಯೆಯ ಕ್ರೂಸರ್ ಜೀಪ್ ಅನ್ನು ಕೇಂದ್ರ ಬಸ್ ನಿಲ್ದಾಣದಿಂದ ಬಾಗಲಕೋಟೆ ಕ್ರಾಸ್ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ.ಈ…


