ನಿವೃತ್ತ ತಹಸೀಲ್ದಾರ್ ದೇಹ ದಾನಕ್ಕೆ ನೋಂದಣಿ
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 20: ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಅಂಗರಚನಾಶಾಸ್ತ್ರ ವಿಭಾಗಕ್ಕೆ ತಮ್ಮ ದೇಹದಾನ ಮಾಡುವುದಾಗಿ ದಂಪತಿ ಮತ್ತು ನಿವೃತ್ತ ತಹಸೀಲ್ದಾರ ಹೆಸರು ನೋಂದಾಯಿಸಿದ್ದಾರೆ.ವಿಜಯಪುರ ನಗರದ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಮತ್ತು ವಿವೇಕ ನಗರ ನಿವಾಸಿ ಸುರೇಶ ಚನ್ನಬಸಪ್ಪ ದೇಸಾಯಿ(71) ಮತ್ತು ಅವರ ಪತ್ನಿ ಹಾಗೂ ಸಮಾಜ ಸೇವಕಿ ಗೀತಾ ಸುರೇಶ ದೇಸಾಯಿ(63) ಹಾಗೂ ನಗರದ ಕನಕದಾಸ ಬಡಾವಣೆಯ ನಿವಾಸಿ ಮತ್ತು ನಿವೃತ್ತ ತಹಸೀಲ್ದಾರ…