ಈದ್ ಮಿಲಾದ್ ಮೆರವಣಿಗೆ: ಭಾವೈಕ್ಯತೆಯ ಸಂದೇಶ ಸಾರಲು ಸಜ್ಜಾಗಿರುವ ವಿಜಯಪುರ
ಸರ್ವಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮುಖಂಡರ ಕರೆ ಸಪ್ತಸಾಗರ ವಾರ್ತೆ,ವಿಜಯಪುರ, ಆ.21:ಐತಿಹಾಸಿಕ ವಿಜಯಪುರದ ಸೌಹಾರ್ದತೆ, ಸಹಬಾಳ್ವೆ ಹಾಗೂ ಸರ್ವಧರ್ಮೀಯ ಭಾವೈಕ್ಯತೆಯ ಪ್ರತೀಕವಾಗಿ ಆ.25ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಗೆ ಸರ್ವಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಧಾರ್ಮಿಕ ಹಾಗೂ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.ಈದ್ ಮಿಲಾದ್ ಮೆರವಣಿಗೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಲ್ಲ. ಶತಮಾನಗಳಿಂದ ವಿಜಯಪುರದಲ್ಲಿ ಬೆಳೆದು ಬಂದಿರುವ ಪ್ರೀತಿ, ಸಹೋದರತ್ವ, ಮಾನವೀಯತೆ ಮತ್ತು ಸೌಹಾರ್ದ ಪರಂಪರೆಯನ್ನು ಸಾರುವ ಮಹತ್ವದ ಸಂದರ್ಭವಾಗಿದೆ ಎಂದು ಹಾಶಿಂಪೀರ ದರ್ಗಾದ ಜೈನುಲ್…


