ಸ್ತ್ರೀಪುರುಷರಿಬ್ಬರಿಗೂ ಸಮಾನ ಸ್ಥಾನಮಾನಗಳು ಇದ್ದಾಗ ಮಾತ್ರ ಸಮ ಸಮಾಜ ಕಟ್ಟಲು ಸಾಧ್ಯ-ಡಾ. ರಂಜಿತಾ
ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 22:ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿನಿ ಚಂದನಾ ಶೃಂಗೇರಿ ಅವರು ಭರತನಾಟ್ಯ ಮಾಡುವುದರೊಂದಿಗೆ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.“ವೀರಾಂಗನ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿ” ಪಡೆದಿದ್ದಕ್ಕಾಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭಾರತಿ. ವಾಯ್.ಖಾಸನೀಸ ಮತ್ತು ಪ್ರೆಸಿಡೆನ್ಸಿ ಬಿ. ಇಡಿ ಕಾಲೇಜ್ ಪ್ರಾಚಾರ್ಯ ಡಾ.ಸುಮಾ. ಬೋಳರಡ್ಡಿ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.ಮುಖ್ಯ ಅತಿಥಿ ನ್ಯಾಯವಾದಿ ಡಾ.ರಂಜಿತಾ.ಕೆ.ಆರ್ ಅವರು ಮಾತನಾಡಿ, “ದಶಪುತ್ರ ಸಮ ಕನ್ಯಾ”…


