ವಿಜಯಪುರದ ರಂಗಭೂಮಿ ಮತ್ತು ಸಿನಿಮಾ ಕಲಾವಿದೆ ‘ಗೋಹಾರ್ ಬಾಯಿ ಕರ್ನಾಟಕಿ ‘ ಪುಸ್ತಕ ಬೆಂಗಳೂರಲ್ಲಿ ಬಿಡುಗಡೆ
ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 5:ಕರ್ನಾಟಕ ಸಾಹಿತ್ಯ ಅಕಾಡಮಿಯ ಮಹಿಳಾ ಮುನ್ನಡೆಯ ಪುಸ್ತಕಗಳಲ್ಲಿ ವಿಜಯಪುರದ ಸಾಹಿತಿ ಮೋಹನ ಕಟ್ಟಿಮನಿಯವರು ರಚಿಸಿದ ಹೆಸರಾಂತ ರಂಗಭೂಮಿ ಮತ್ತು ಸಿನಿಮಾ ಅಭಿನೆತ್ರಿ ‘ಗೋಹಾರ್ ಬಾಯಿ ಕರ್ನಾಟಕಿ ‘ ಅವರ ಪುಸ್ತಕವನ್ನು 05-06-2026 ರಂದು ಬೆಂಗಳೂರಿನ ನಯನಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.ರಾಷ್ಟ್ರದ ರಂಗಭೂಮಿ ಇತಿಹಾಸದಲ್ಲಿ ದಂತಕತೆಯಾದ ‘ ಗೋಹಾರ್ ಬಾಯಿ ‘ ದುರಂತ ನಾಯಕಿ ರಂಗಭೂಮಿಯ ಮೇಲೆ ಲಕ್ಷಾಂತರ ಜನರ ಹೃದಯದಲ್ಲಿ ಉಳಿದ ಈ ಕಲಾವಿದೆ ಇತಿಹಾಸ ನಿರ್ಮಿಸಿದ್ದರೂ ಇತಿಹಾಸದ ಪುಟಗಳಲ್ಲಿ ಇವರು ಉಳಿದಿರಲಿಲ್ಲ…


