
ಬಿಎಲ್ ಡಿಇ ಡೀಮ್ಡ್ ವಿವಿ ವತಿಯಿಂದ ಹರ್ ಘರ್ ತಿರಂಗಾ
ಸಪ್ತಸಾಗರ ವಾರ್ತೆ, ವಿಜಯಪುರ, ಆ. 12: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇಂದು ಮಂಗಳವಾರ ಹರ್ ಘರ್ ತಿರಂಗಾ ರ್ಯಾಲಿ ನಡೆಯಿತು.ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ತಿರಂಗಾ ರ್ಯಾಲಿಗೆ ಚಾಲನೆ ನೀಡಿದರು.ಈ ರ್ಯಾಲಿಯು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಮುಂಭಾಗದ ಸೋಲಾಪೂರ ರಸ್ತೆಯಿಂದ 770 ಲಿಂಗದ ದೇವಸ್ಥಾನ, ಸಂಗನಬಸವ ಕಲ್ಯಾಣ ಮಂಟಪ ಮಾರ್ಗವಾಗಿ ಬಿ.ಎಲ್.ಡಿ.ಇ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಏನ್.ಆರ್.ಐ ಹಾಸ್ಟೇಲ್ ಮಾರ್ಗವಾಗಿ ಮರಳಿ ವಿಶ್ವವಿದ್ಯಾಲಯದಲ್ಲಿ…