ಶರಣರ ವಚನಗಳಲ್ಲಿ ಹೃದಯತುಂಬಿದ ಅನುಭಾವ: ರೆಡ್ಡಿ
ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 19:ಶರಣರು ತಮ್ಮ ವಚನಗಳ ಮೂಲಕ ಸತ್ಯ, ನಿಷ್ಠೆ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರು, ಅದರಲ್ಲಿ ಕಾಯಕ, ದಾಸೋಹ ಪೂಜೆಯಾಗಬೇಕು. ಶರಣರ ವಚನಗಳಲ್ಲಿ ಹೃದಯ ತುಂಬಿದ ಅನುಭಾವ ಎಂದು ಉಪನ್ಯಾಸಕ ಸಂಗನಬಸಪ್ಪ ರೆಡ್ಡಿಹೇಳಿದರು.ನಗರದ ಅ.ಭಾ.ವಿ. ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಲಿಂಗಾಯತ ಸಭಾಭವನದಲ್ಲಿ ಏರ್ಪಡಿಸಿದ 77ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಸಕಲೇಶ ಮಾದರಸ ಅವರ ಅನುಭಾವ ಕುರಿತು ಮಾತನಾಡಿದರು.ರಾಜ ಪರಿವಾರದ ಸಕಲೇಶರು ಸಂಸಾರವನ್ನುತ್ಯಾಗಮಾಡಿ ಸದ್ಗುರುವನ್ನು ಕಾಣಲು ಶ್ರೀಶೈಲಕ್ಕೆ ಹೋಗುತ್ತಾರೆ. ಶಿವನ…


