ಬಸವ ಜನ್ಮಸ್ಥಳ ಇಂಗಳೇಶ್ವರದಿಂದ ಕೂಡಲ ಸಂಗಮದವರೆಗೆ ಹೊಸ ರೈಲು ಮಾರ್ಗಕ್ಕೆ ಆಗ್ರಹ
ಸಪ್ತಸಾಗರ ವಾರ್ತೆ,ವಿಜಯಪುರ, ಆ.2: ವಿಶ್ವಗುರು ಬಸವಣ್ಣ ಅವರ ಜನ್ಮಸ್ಥಳ ಇಂಗಳೇಶ್ವರದಿಂದ ಬಸವಕಲ್ಯಾಣ ಮಾರ್ಗವಾಗಿ ಐಕ್ಯಸ್ಥಳ ಕೂಡಲ ಸಂಗಮದವರೆಗೆ ಹೊಸ ರೈಲು ಮಾರ್ಗ ನಿರ್ಮಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.ಇಂಗಳೇಶ್ವರ ಗ್ರಾಮದ ಅಗ್ಗಳ ಕವಿ ಪ್ರತಿಷ್ಠಾನ ಹಾಗೂ ಗ್ರಾಮಸ್ಥರ ಪರವಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅಪರ ಜಿಲ್ಲಾಧಿಕಾರಿ ಈದ್ರಾಮ್ ಅವರ ಮೂಲಕ ಶನಿವಾರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಗ್ಗಳ ಕವಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ನಾಗಪ್ಪ ಚಿಗರಿ ಮಾತನಾಡಿ, ಇಂಗಳೇಶ್ವರದಿಂದ ಆರಂಭವಾಗುವ ರೈಲು…


