ಇಸ್ರೇಲ್ ಮೇಲೆ ದಾಳಿ: ಇದು ಸಿಯಾ, ಸುನ್ನಿ ಕದನ- ಯತ್ನಾಳ್ ಪ್ರತಿಕ್ರಿಯೆ
ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 2:ಇಸ್ರೇಲ್ ಮೇಲೆ ಇರಾನ್ ಹಾಗೂ ಅಮೆರಿಕಾ ದಾಳಿ ಅದು ಅವರವರ ಮಧ್ಯ ಇರುವ ಸಿಯಾ, ಸುನ್ನಿ ಜಗಳ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,ರಂಜಾನ್ ನಂತಹ ಪವಿತ್ರ ದಿನಗಳಲ್ಲಿ ಹೊಡೆದಾಡುತ್ತಿದ್ದಾರೆ. ಯಾವ ಧರ್ಮ ಎಲ್ಲಿ ಹುಟ್ಟಿದ್ದು ಅಲ್ಲೇ ಯುದ್ದ ಆರಂಭವಾಗಿದೆ. ಯುದ್ಧಕ್ಕೂ ಭಾರತಕ್ಕೂ ಸಂಬಂಧವಿಲ್ಲ ಎಂದರು.ಭಾರತ ಎಲ್ಲಾ ದೇಶಗಳ ಜೊತೆ ಒಳ್ಳೆಯ ಸಂಬಂಧವಿರಿಸಿಕೊಂಡಿದೆ. ಇಸ್ರೇಲ್, ಇರಾನ್ ಹಾಗೂ ಅಮೆರಿಕ ಜೊತೆ…


