ಪೋಲಿಯೋ ಹನಿ ಜೀವಮಾನದ ರಕ್ಷಕ-ಸಂತೋಷ ಬಂಡೆ
ಸಪ್ತಸಾಗರ ವಾರ್ತೆ,ಇಂಡಿ, ಜೂ. 27: ಪೋಲಿಯೋ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿ. ಲಸಿಕೆ, ಜಾಗೃತಿ ಮತ್ತು ಸ್ವಚ್ಛತೆಯ ಮೂಲಕ ನಾವು ಆರೋಗ್ಯಕರ ಸಮಾಜ ನಿರ್ಮಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡ ಪಲ್ಸ್ ಪೋಲಿಯೋ ಲಸಿಕೆಯ ಜಾಗೃತಿ ಜಾಥಾ ಉದ್ಧೇಶಿಸಿ ಅವರು ಮಾತನಾಡಿದರು.ಕೇವಲ ಎರಡು ಹನಿ ಪೋಲಿಯೊ ಲಸಿಕೆ ಮಗುವಿಗೆ ಜೀವಮಾನದ ರಕ್ಷಣೆ ನೀಡುತ್ತದೆ. ಭಾರತವನ್ನು…


