ರಾಜ್ಯದಲ್ಲಿ ದಲಿತ ವ್ಯಕ್ತಿ ಸಿಎಂ ಆಗಬೇಕೆಂಬ ಧ್ವನಿ ನಿರಂತರವಾಗಿ ಎತ್ತುತ್ತೇನೆ- ಸಂಸದ ಜಿಗಜಿಣಗಿ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 14:ರಾಜ್ಯದಲ್ಲಿ ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿ ಸಿಎಂ ಆಗಬೇಕು ಎಂಬ ವಿಚಾರದ ಬಗ್ಗೆ ನಾನು ಕೊನೆಯವರೆಗೂ ಧ್ವನಿ ಎತ್ತುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಜಯೇಂದ್ರ ಸೇರಿದಂತೆ ಯಾರೇ ಸಿಎಂ ಆದರೂ ನನಗೆ ಅಸಮಾಧಾನವಿಲ್ಲ.ಆದರೆ ದಲಿತರು ಸಿಎಂ ಆಗಬೇಕೆಂಬ ಧ್ವನಿಯನ್ನು ಕೊನೆಯವರೆಗೂ ಎತ್ತುತ್ತೇನೆ ಎಂದರು.ನಾನೇ ಸಿಎಂ ಆಗಬೇಕೆಂಬುದಿಲ್ಲ. ಯಾರೇ ದಲಿತ ನಾಯಕ ಸಿಎಂ ಆಗಲಿ ಎಂಬುದು ನನ್ನ ಆಸೆ. ದಲಿತರನ್ನು ಸಿಎಂ ಮಾಡುತ್ತಾರೋ…


