ಮರ್ಯಾದೆಗೇಡಿ ಹತ್ಯೆ: ದಲಿತ ಸ್ವರಾಜ್ಯ ಸೇನೆ ಖಂಡನೆ
ಸಪ್ತಸಾಗರ ವಾರ್ತೆ ವಿಜಯಪುರ, ಡಿ. 29:ಹುಬ್ಬಳ್ಳಿ ತಾಲೂಕಿನ ಇನಾಮ ವೀರಪುರ ಗ್ರಾಮದ ಮಾನ್ಯಾ ಪಾಟೀಲ್ ಸಹೋದರಿಯ ಮರ್ಯಾದೆಗೇಡಿ ಹತ್ಯೆ ಖಂಡಿಸಿ ದಲಿತ ಸ್ವರಾಜ್ಯ ಸೇನೆ ವತಿಯಿಂದ ಜಿಲ್ಲಾಡಳಿತದ ಮೂಲಕ ಸೋಮವಾರ ರಾಷ್ಟ್ರಪತಿಗಳಿಗೆ ಖಂಡನಾ ಪತ್ರ ಸಲ್ಲಿಸಿದರು.ಈ ಘಟನೆಗೆ ಇಡೀ ಮಾನವ ಸಮಾಜವವೇ ತಲೆತಗ್ಗಿಸುವಂತೆ ಆಗಿದೆ. ಮಗಳ ಬಾಳಿನಲ್ಲಿ ಜನ್ಮದಾತನೇ ರಾಕ್ಷಸನಂತಾಗಿದ್ದಾನೆ ಎಂದು ಡಿಎಸ್ಎಸ್ ಅಧ್ಯಕ್ಷ ಗೌಡಪ್ಪ ಬಡಿಗೇರ ಖಂಡಿಸಿದರು. ಪೂರ್ಣ ವಯಸ್ಕರು ಒಪ್ಪಿ ಮದುವೆಯಾಗುವುದು ತಪ್ಪೇ. ಸಮಾಜದಲ್ಲಿ ಶೋಷಣೆಗೊಳಗಾದ ಎಲ್ಲ ಸಮುದಾಯಗಳಲ್ಲಿ, ಮಹಿಳಾ ಸಮುದಾಯ ಮೊದಲಾಗಿದೆ.ಬಸಮ್ಮ, ಸೌಜನ್ಯ,…


