ನ್ಯಾಯಾಧೀಕರಣದ “ಐ” ತೀರ್ಪಿನ ಅಧಿಸೂಚನೆಗೆ ಹೋರಾಟ ಕುರಿತು ಪೂರ್ವಭಾವಿ ಸಭೆ 16ರಂದು
ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 14:ನ್ಯಾ. ಬ್ರಿಜೇಶ್ಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣದ“ಐ” ತೀರ್ಪಿನಂತೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರದಮೇಲೆ ಒತ್ತಡ ಹೇರಲು ಮುಂದಿನ ಹೋರಾಟದ ರೂಪರೇಷತಯಾರಿಸುವದು ಮತ್ತು ಹೋರಾಟ ಸಮೀತಿ ರಚಿಸುವುದರ ಕುರಿತುಪೂರ್ವಭಾವಿ ಸಭೆಯನ್ನು ವಿಜಯಪುರ ನಗರದ ಅಂಬೇಡ್ಕರವೃತ್ತದ ಬಳಿ ಇರುವ ಡಾ. ಬಿ.ಆರ್.ಅಂಬೇಡ್ಕರ ಸಭಾ ಭವನದಲ್ಲಿಜೂ. 16ರಂದು ಬೆಳಗ್ಗೆ 10-30 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದೆ.ಈ ಸಭೆಗೆ ನೀರಾವರಿ ತಜ್ಞ ಡಾ. ಕೃಷ್ಣ ಕೋಲಾರ ಕುಲಕರ್ಣಿ, ಧಾರವಾಡ ಕೃಷಿವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕ ಡಾ. ರಾಜೇಂದ್ರಪೋದ್ದಾರ, ಜಿಲ್ಲಾ…


