ಎ.2ರಂದು “ನಾನು ಕರುಣಾಕರ” ಚಲನಚಿತ್ರ ಬಿಡುಗಡೆ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 7: ಮಕ್ಕಳು ನೋಡಬೇಕಾದ ಹಾಗೂ ಮಗನ ಆಸೆ ಪೂರೈಸಲು ತಂದೆ ಯಾವ ರೀತಿ ಪ್ರಯತ್ನಿಸುತ್ತಾನೆ ಎಂಬ ಕಥಾ ಹಂದರವುಳ್ಳ ಸದಭಿರುಚಿಯ `ನಾನು ಕರುಣಾಕರ’ ಎಂಬ ಚಲನಚಿತ್ರ ಫೋಸ್ಟ್ ಪ್ರೊಡೆಕ್ಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎಪ್ರಿಲ್ 2 ರಂದು ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರದ ನಿರ್ಮಾಪಕ ನಮನ್ ನಾರಾಯಣ ಸಂತೋಷ್ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಸಿನೆಮಾಗಳು ಇತ್ತೀಚಿಗೆ ಬರುತ್ತಿಲ್ಲ ಎಂಬ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದೆ, ಮಧ್ಯಮ…


