ಎಲ್ಲಿ ಮಹಿಳೆಯರಿಗೆ ಗೌರವವಿದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ- ದಾನಮ್ಮ ತಾಯಿ
ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 15 :ಮಹಿಳೆಯರನ್ನು ಪೂಜ್ಯನಿಯ ಭಾವದಿಂದ ನೋಡಬೇಕು. ಅವಳನ್ನು ಗೌರವಿಸಿದರೆ ದೇವತೆಗಳು ಪ್ರಸನ್ನರಾಗುತ್ತಾರೆ ಎಂದು ಶಿವಬಸವ ನಿಲಯದ ದಾನಮ್ಮತಾಯಿ ಹೇಳಿದರು.ಭಾನುವಾರ ನಗರದ ಸಾಯಿ ಪಾರ್ಕ್ ಗೀತಾ ಪಾಠಶಾಲೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಹಿಳೆ ಮನೆಯ ಒಳಗೂ ಮತ್ತು ಹೊರಗೂ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ. ಏನೇ ಕಷ್ಟ ಬಂದರೂ ಕುಟುಂಬ ನಿರ್ವಹಣೆ ಜೊತೆಗೆ ಉದ್ಯೋಗದಲ್ಲಿಯೂ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ. ಹಾಗಾಗಿ ಸಮಾಜ ಅವಳಿಗೆ ಇನ್ನೂ ಹೆಚ್ಚಿನ ಅವಕಾಶವನ್ನು ಕಲ್ಪಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ…


