ಭಾರತ ಭೀಮ್ ಸೇನೆ ಸಂಘಟನಾ ಕಾರ್ಯದರ್ಶಿಯಾಗಿ ಬಿರಾದಾರ ನೇಮಕ
ಸಪ್ತಸಾಗರ ವಾರ್ತೆ,ಆಲಮೇಲ, ಮೇ. 24:ಭಾರತ ಭೀಮ್ ಸೇನೆಯ ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಆಲಮೇಲ ತಾಲ್ಲೂಕಿನ ಗುಡ್ಡಳ್ಳಿ ಗ್ರಾಮ ಪುಂಡಲೀಕ ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ.ಭಾರತ ಭೀಮ್ ಸೇನೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರವೀಣ ಸುಲ್ಪಿ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ.ಸಂಸ್ಥಾಪಕ ರಾಜ್ಯಧ್ಯಕ್ಷ ದಿನೇಶ್ ಅವರ ನೇತೃತ್ವದ ರಾಜ್ಯ ಸಮಿತಿಯು ಈ ನೇಮಕಾತಿ ಪತ್ರವನ್ನು ಅಧಿಕೃತವಾಗಿ ನೀಡಿದೆ.


