ಹಿರಿಯ ಪತ್ರಕರ್ತ ಪ್ರದೀಪ ಕುಲಕರ್ಣಿಗೆ ಮಾ. ರಾಮಮೂರ್ತಿ ದತ್ತಿನಿಧಿ ಪ್ರಶಸ್ತಿ ಗರಿ
ಸಪ್ತಸಾಗರ ವಾರ್ತೆ,ವಿಜಯಪುರ, ಜು. 23:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ವತಿಯಿಂದ ನೀಡಲಾಗುವ ಪ್ರತಿಷ್ಠಿತ ಮಾ. ರಾಮಮೂರ್ತಿ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗೆ ವಿಜಯಪುರದ ಹಿರಿಯ ಪತ್ರಕರ್ತ ಪ್ರದೀಪ ಅಣ್ಣಾಜಿ ಕುಲಕರ್ಣಿ ಅವರು ಭಾಜನರಾಗಿದ್ದಾರೆ.ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ದೀರ್ಘಕಾಲದ ನಿಷ್ಠಾವಂತ ಸೇವೆ, ವೃತ್ತಿಪರತೆ, ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸಂದ ಈ ಗೌರವ ನಿಜಕ್ಕೂ ಅವರ ಸಾಧನೆಯ ಪ್ರತೀಕವಾಗಿದೆ.ಅವರ ಮಾರ್ಗದರ್ಶನ, ಸರಳ ವ್ಯಕ್ತಿತ್ವ ಹಾಗೂ ಪತ್ರಿಕೋದ್ಯಮದ ಮೇಲಿನ ಬದ್ಧತೆ ಅನೇಕ ಯುವ ಪತ್ರಕರ್ತರಿಗೆ ಸ್ಫೂರ್ತಿದಾಯಕವಾಗಿದೆ.ಪ್ರದೀಪ ಕುಲಕರ್ಣಿ ಅವರಿಗೆ…


