ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಸಂಪನ್ನ
ಸಪ್ತಸಾಗರ ವಾರ್ತೆ, ವಿಜಯಪುರ, ಅ.7 : ವಿಜಯಪುರ ನಗರದ ಕವತಾಳ ಲೇಔಟ್ನ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಭಕ್ತಿಭಾವದಿಂದ ಮತ್ತು ವೈಭವೋಪೇತವಾಗಿ ನೆರವೇರಿತು. ಕೊಜಾಗರಿ ಪೂರ್ಣಿಮೆಯ ದಿನದಂದು ಬೆಳಿಗ್ಗೆ ದೇವಿಗೆ ಮಹಾಪೂಜೆ ಹಾಗೂ ಅಲಂಕಾರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಯಿತು.ನಂತರ ಋತ್ವಿಜ ಗಣದ ನೇತೃತ್ವದಲ್ಲಿ ಚಂಡಿ ಹವನವನ್ನು ವೈದಿಕ ಪದ್ದತಿಯ ಪ್ರಕಾರ ಸಂಪನ್ನಗೊಳಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ ನಡೆದಿದ್ದು, ನಂತರ ಮಧ್ಯಾಹ್ನ 1.30ಕ್ಕೆ ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 11 ಗಂಟೆಗೆ ಗೊಂಧಳ ಕಾರ್ಯಕ್ರಮವೂ…


