ವೇದ ಅಕಾಡೆಮಿಯಲ್ಲಿ ವಿಜೃಂಭಣೆಯ ಮಕರ ಸಂಕ್ರಾಂತಿ ದಿನಾಚರಣೆ
ಸಪ್ತಸಾಗರ ವಾರ್ತೆ, ವಿಜಯಪುರ, ಜ. 14: ಭಾರತದ ಅನೇಕ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯು ವಿಶೇಷ ಹಬ್ಬವೆನಿಸಿದೆ. ಚಳಿಗಾಲ ಮುಗಿದು ಬೇಸಿಗೆಯ ಮುನ್ಸೂಚನೆಯ ಹಬ್ಬವಾಗಿ ಋತುಗಳ ಬದಲಾವಣೆಯನ್ನು ಸೂಚಿಸುತ್ತದೆ. ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆದರೂ ಕರ್ನಾಟಕದಲ್ಲಿ ಮಕರ ಸಂಕ್ರಮಣ ಹಬ್ಬವೆಂದು ಪ್ರಸಿದ್ಧಿ ಪಡೆದಿದೆ. ರೈತರಿಗೆ ಇದು ಸುಗ್ಗಿಯ ಹಬ್ಬವೆನಿಸಿದೆ ಎಂದು ಮಕ್ಕಳನ್ನುದ್ದೇಶಿಸಿ ವೇದ ಅಕಾಡೆಮಿಯ ನಿರ್ದೇಶಕಿ ಶಿವಲೀಲಾ ಕೆಲೂರ ಅವರು ಹೇಳಿದರು.ನಗರದ ಹೊರವಲಯದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಅಕಾಡೆಮಿಯಲ್ಲಿ ಮಕರ ಸಂಕ್ರಮಣ ಹಬ್ಬವನ್ನು ಮಕ್ಕಳೊಂದಿಗೆ…


