ವಿಶಾಲ ಗಾಂಧಿ ವೃತ್ತದಲ್ಲಿ ಪುಟ್ಟ ಗಾಂಧಿ..! ರಾಷ್ಟ್ರಪಿತನಿಗೆ ವಿಜಯಪುರದಲ್ಲಿ ಸಿಗಬೇಕಿದೆ ಭವ್ಯ ಗೌರವ
ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಜು. 9:ಐತಿಹಾಸಿಕ ಸ್ಮಾರಕಗಳ ನಗರ, ಪ್ರವಾಸೋದ್ಯಮದ ಪ್ರಮುಖ ತಾಣ, ಸ್ಮಾರಕಗಳ ವೈಭವಕ್ಕೆ ಹೆಸರಾದ ವಿಜಯಪುರ ನಗರದ ಹೃದಯಭಾಗದಲ್ಲಿರುವ ಗಾಂಧಿ ವೃತ್ತ ಇಂದು ಒಂದು ಪ್ರಶ್ನೆಯನ್ನು ಎತ್ತುತ್ತಿದೆ—ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರಿಗೆ ತಕ್ಕ ಗೌರವ ಇಲ್ಲಿ ಸಿಕ್ಕಿದೆಯೇ? ಗಾಂಧಿ ಪ್ರತಿಮೆಗೆ ಕಾಯಕಲ್ಪ ಯಾವಾಗ? ನಗರದ ಅತ್ಯಂತ ಪ್ರಮುಖ ವೃತ್ತಗಳಲ್ಲಿ ಒಂದಾದ ಗಾಂಧಿ ವೃತ್ತದಲ್ಲಿ ವಿಶಾಲವಾದ ಜಾಗವಿದೆ. ದಿನವಿಡೀ ಸಾವಿರಾರು ವಾಹನಗಳು, ಪಾದಚಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ, ಈ ವೃತ್ತದ ಮಧ್ಯಭಾಗದಲ್ಲಿರುವ ಗಾಂಧೀಜಿಯವರ ಪ್ರತಿಮೆ…


