ಕಗ್ಗೋಡದಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸತ್ಸಂಗ


ಸಪ್ತಸಾಗರ ವಾರ್ತೆ, ವಿಜಯಪುರ, ಜ 25:
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದಿಂದ ಎರಡು ದಿನದ ಸತ್ಸಂಗ ವರ್ಗವನ್ನು ಕಗ್ಗೋಡ ಗ್ರಾಮದ ರಾಮನಗೌಡ ಪಾಟೀಲ್ ಯತ್ನಾಳವರ ಗೋಶಾಲೆಯಲ್ಲಿ ನಡೆದಿದ್ದು, ಸುಮಾರು 120 ಜನರ ಶಿಕ್ಷ ವರ್ಗವನ್ನು ನಡೆಯಿತು.
ಇವತ್ತು ಬೆಳಗ್ಗೆ 7:30ಕ್ಕೆ ಕಗ್ಗೋಡ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಕೀರ್ತಿನ ಭಜನೆವನ್ನು ಮಾಡುತ್ತಾ ಹಿಂದೂ ಧರ್ಮದ ಜನ ಜಾಗೃತಿ ಮಾಡಲಾಯಿತು.
ಅನೇಕ ಮಹಾಪುರುಷರ ಭಜನೆ ಹಾಡುಗಳನ್ನು ಹೇಳಲಾಯಿತು. ಇದರಲ್ಲಿ ಕ್ಷೇತ್ರಿಯ ಸತ್ಸಂಗ ಪ್ರಮುಖರಾದ ಮಹಾಬಲೇಶ್ವರ ಹೆಗಡೆ. ಪ್ರಾಂತ ಸತ್ಸಂಗ ಪ್ರಮುಖರಾದ ನಾರಾಯಣ, ಮಠಾಧಿಕಾರಿ ಹಾಗೂ ಸಾಮಾಜಿಕ ಸಾಮರಸ್ಯದ ಪ್ರಾಂತ ಪ್ರಮುಖ ಶ್ರೀಮಂತ ದುದ್ದಗಿ, ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದಣ್ಣ ಹೂಗಾರ, ಭೀಮಶಂಕರ ಹೊನ್ನುಟಗಿ, ಜಿಲ್ಲಾ ಧರ್ಮಚಾರ್ಯರ ಸಂಪರ್ಕ ಪ್ರಮುಖ ಪ್ರಕಾಶ ಬಿರಾದಾರ, ಜಿಲ್ಲಾ ಸತ್ಸಂಗ ಪ್ರಮುಖ ಸುರೇಶ ಕುಂಬಾರ, ಶಿವಾನಂದ ಸುತಗೊಂಡ, ನೇತಾಜಿ ಪವಾರ, ಉಮೇಶ ತೆಲಗಿ ಅನೇಕ ಜನ ಉಪಸ್ಥಿತರಿದ್ದರು.

Share this